- Advertisement -
- Advertisement -



ವಿಟ್ಲ: ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಮಂಗಳೂರು ಗ್ರಾಮಾಂತರ ಜಿಲ್ಲೆಇದರ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಖಂಡ ಭಾರತ ಸಂಕಲ್ಪ ದಿನ ವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮವು ಆ.10-8-2025ನೇ ಆದಿತ್ಯವಾ ಸಂಜೆ 4:00 ಗಂಟೆಗೆ ಉಮಾಶಿವ ದೇವಸ್ಥಾನ ಗೇರುಕಟ್ಟೆ ಕಲ್ಲಡ್ಕದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಹಿಂಜಾವೇ ಜಿಲ್ಲಾ ಸಂಯೋಜಕ್ ನರಸಿಂಹ ಮಾಣಿ, ದಯಾನಂದ ಶೆಟ್ಟಿ ಉಜಿರೆಮಾರ್, ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಅರುಣ್ ವಿಟ್ಲ, ಜಯರಾಮ್, ಹರೀಶ್ ವಿಟ್ಲ, ಪದ್ಮನಾಭ ಕಟ್ಟೆ, ಹಿಂಜಾವೇ ತಾಲೂಕ್ ಸಂಯೋಜಕ್ ನವೀನ್ ಕೋಲ್ಪೆ, ರವೀಶ್ ವಿಟ್ಲ, ಹರ್ಷ ವಿಟ್ಲ, ಅಕ್ಷಯ್ ಕಲ್ಲಡ್ಕ, ರಾಜೇಶ್ ಕರೋಪಾಡಿ, ಲಕ್ಷ್ಮಣ ಕರೋಪಾಡಿ, ರವಿವರ್ಮ, ನಾಗೇಶ್ ಸೂರ್ಯ, ರಾಜೇಶ್ ವಿಟ್ಲ ಉಪಸ್ಥಿತರಿದ್ದರು.

- Advertisement -








