- Advertisement -
- Advertisement -
ಕಾರ್ಕಳ: ವಾಹನಗಳ ನಡುವೆ ಸರಣಿ ಅಪಘಾತ ನಡೆದಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಿರ್ಗಾನ ಗ್ರಾಮದ ದುರ್ಗಂಟ್ರಾಯ ತಿರುವಿನ ಬಳಿ ಸೋಮವಾರ ರಾತ್ರಿ ನಡೆದಿದೆ
ಸೆ. 12ರ ರಾತ್ರಿ 9:45ರ ವೇಳೆ ಹೀರ್ಗಾನ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ದುರ್ಗಾಂಬ ಬಸ್ ಕಾರ್ಕಳದಿಂದ ಹೆಬ್ರಿಗೆ ಸಾಗುತ್ತಿದ್ದ ಮಹೇಂದ್ರ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿಕಪ್ ವಾಹನ ರಸ್ತೆಯಲ್ಲಿ ಜಾರಿಕೊಂಡು ಹೋಗಿ ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಿಂದ ಪಿಕಪ್ ವಾಹನದ ಚಾಲಕ ಹೀರ್ಗಾನ ಕೊರಳ ನಿವಾಸಿ ಸಂತೋಷ್ ನಾಯ್ಕ್ (36) ಎಂಬವರು ಹೊರಕ್ಕೆ ಎಸೆಯಲ್ಪಟ್ಟು ಪೊದೆಗೆ ಬಿದ್ದಿದ್ದಾರೆ, ಅವರ ಎದೆ ಮತ್ತು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ದ್ವಿಚಕ್ರ ವಾಹನದ ಸವಾರ ಉದಯ ಶೆಟ್ಟಿ ಅವರ ಕಾಲಿಗೆ ತರಚಿದ ಗಾಯವಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -