Saturday, May 4, 2024
spot_imgspot_img
spot_imgspot_img

ವಿಟ್ಲ:ಹಿಂ.ಜಾ.ವೇ ವಿಟ್ಲ ತಾಲೂಕು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ

- Advertisement -G L Acharya panikkar
- Advertisement -

ವಿಟ್ಲ:ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಇದರ ವತಿಯಿಂದ ಅನೇಕ ಭಾಗಗಳನ್ನು ಕಳೆದುಕೊಂಡು ಚಿಕ್ಕದಾಗಿದ್ದ ಭಾರತ ಮತ್ತೆ 1947ರ ಮಧ್ಯರಾತ್ರಿ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಆ ಕರಾಳ ರಾತ್ರಿಯ ಘನಘೋರ ದುರಂತವನ್ನು ನೆನಪಿಸುತ್ತಾ, ಕಳೆದುಹೋದ ಭಾಗಗಳೆಲ್ಲವನ್ನೂ ಮತ್ತೆ ಒಂದುಗೂಡಿಸಿ ಅಖಂಡ ಪರಮವೈಭವ ಭಾರತ ನಿರ್ಮಾಣದ ಸಂದೇಶ ಸಾರಲು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ “ಅಖಂಡ ಭಾರತ ಸಂಕಲ್ಪ ದಿನ” ಕಾರ್ಯಕ್ರಮ ನಡೆಯಲಿದೆ.

ದಿನಾಂಕ 14-8-2022ನೇ ಆದಿತ್ಯವಾರ 3.00ಗಂಟೆಗೆ ವೀರಕಂಬ – ಮಾಣಿ – ಪಾಣೆಮಂಗಳೂರು ಈ ಮೂರು ಕಡೆಗಳಿಂದ ವಾಹನ ಜಾಥಾ ನಡೆದು ನಂತರ ಸಭಾ ಕಾರ್ಯಕ್ರಮವು ಸಂಜೆ 4.00 ಗಂಟೆಗೆ ಕಲ್ಲಡ್ಕ ಶ್ರೀ ಸತ್ಯದೇವತಾ ದೈವಸ್ಥಾನ ಬಳಿ ನಡೆಯಲಿದೆ.

ದಿಕ್ಸೂಚಿ ಭಾಷಣವನ್ನು ಪ್ರೊಫೆಸರ್‌,ಕೆಂಪೆಗೌಡ ಮೆಡಿಕಲ್‌ ಕಾಲೇಜ್‌ ಬೆಂಗಳೂರಿನ ಗಿರಿಧರ ಉಪಾಧ್ಯಾಯ ಮಾಡಲಿದ್ದಾರೆ. ಅತಿಥಿಗಳಾಗಿ ಆದರ್ಶ ಆಸ್ಪತ್ರೆ ಪುತ್ತೂರಿನ ಡಾ. ಎಂ.ಕೆ ಪ್ರಸಾದ್‌ ಭಂಡಾರಿ ಹಾಗೂ ಭಾರತೀಯ ಭೂ ಸೇನಾ ನಿವೃತ್ತ ಯೋಧರಾದ ಅಲೆಕ್ಸ್‌ ಮೊರಾಸ್‌ ವಹಿಸಲಿದ್ದಾರೆ.

vtv vitla
- Advertisement -

Related news

error: Content is protected !!