- Advertisement -
- Advertisement -
ಸುಳ್ಯ: ಮರದ ಕೊಂಬೆ ಕಡಿಯುತ್ತಿದ್ದ ವೇಳೆ ಮರದಲ್ಲಿದ್ದ ಬಳ್ಳಿಯೊಂದು ಸಿಲುಕಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಮಡಪ್ಪಾಡಿ ಗ್ರಾಮದ ಕೇವಳ ಎಂಬಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಹೂವಪ್ಪ ಗೌಡ ಎನ್ನಲಾಗಿದೆ. ಮನೆಯ ಎದುರಿನಲ್ಲಿದ್ದ ಮರದ ಕೊಂಬೆ ಕಡಿಯಲು ಹೂವಪ್ಪ ಗೌಡ ಅವರು ಮರಕ್ಕೆ ಹತ್ತಿದ್ದರು. ಈ ವೇಳೆ ಮರದ ಕೊಂಬೆ ಕೆಳಗೆ ಬೀಳುವ ಸಂದರ್ಭ ಬೀನೆ ಬಳ್ಳಿಗೆ ಸಿಲುಕಿದರೆನ್ನಲಾಗಿದೆ. ಕೂಡಲೇ ಮನೆಯವರು ಹಾಗೂ ಸ್ಥಳೀಯರು ಸೇರಿ ಅವರನ್ನು ಮರದಿಂದ ಕೆಳಗಿಳಿಸಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರು. ಆದರೆ ಅದಾಗಲೇ ಅವರು ಮೃತಪಟ್ಟಿದ್ದರೆಂದು ತಿಳಿದುಬಂದಿದೆ.
- Advertisement -