- Advertisement -
- Advertisement -



ವಿಟ್ಲ: ಜೆಸಿಐ ಭಾರತದ ವಲಯ 15ರ ನೂತನ ವಲಯಾಧ್ಯಕ್ಷರಾಗಿ ಆಯ್ಕೆಯಾದ ಸಂತೋಷ್ ಶೆಟ್ಟಿ ಇವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ವಿಜಯ ದೀಪೋತ್ಸವ ಕಾರ್ಯಕ್ರಮವು ಲಯನ್ ಸೇವಾ ಮಂದಿರ ಸಿಂಹಗಿರಿ ವಿಟ್ಲ ಇಲ್ಲಿ ನಡೆಯಿತು.

ವಲಯ ಉಪಾಧ್ಯಕ್ಷ ಸುಹಾಸ್ ಮರಿಕೆ, ಮಾಜಿ ವಲಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ, ವಿಟ್ಲ ಘಟಕದ ಅಧ್ಯಕ್ಷೆ ಸೌಮ್ಯ ಚಂದ್ರಹಾಸ, ಕಾರ್ಯದರ್ಶಿ ಹೇಮಲತಾ ಜೈಕಿಶನ್, ಅಶ್ವಿನಿ ದಿನೇಶ್, ವಿಟ್ಠಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಜೆ ಜೆ ಸಿ ಅಧ್ಯಕ್ಷ ಶಾನ್ ಲೆನ್ವಿನ್ ಮಸ್ಕರೇನಸ್, ಜೇಸಿಐ ಪೂರ್ವ ಅಧ್ಯಕ್ಷರು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

- Advertisement -








