




ವಕ್ಕೆತ್ತೂರು: ಶ್ರೀ ಮೂವರ್ ದೈವೊಂಗುಲು ಮಲರಾಯ ದೈವಸ್ಥಾನ (ಮಾಡ) ದ ನೇಮ ಮತ್ತು 5ದಿನಗಳ ಬಂಡಿ ಉತ್ಸವ ಏಪ್ರಿಲ್ 14 ಮಂಗಳವಾರದಿಂದ ಏಪ್ರಿಲ್ 18 ಶನಿವಾರದವರೆಗೆ ನಡೆಯಲಿದೆ.
ಏಪ್ರಿಲ್ 14ರಂದು ಮಂಗಳವಾರ ರಾತ್ರಿ ಗಂಟೆ 10:30ಕ್ಕೆ ಕೋಚೋಡಿ ಭಂಡಾರದ ಮನೆಯಿಂದ ವಕ್ಕೆತ್ತೂರು ಮಾಡಕ್ಕೆ ದೈವಗಳ ಭಂಡಾರ ಬರುವುದು. ದ್ವಜಾರೋಹಣ.
ಏಪ್ರಿಲ್ 15ರಂದು ಬುಧವಾರ ಬೆಳಿಗ್ಗೆ ವಿಷು ಕಣಿ.
ಏಪ್ರಿಲ್ 16ರಂದು ಗುರುವಾರ ಬೆಳಗ್ಗಿನ ಜಾವ 4:00 ಗಂಟೆಗೆ ಕೊಟ್ಯದಾಯನ ಹಾಗೂ ರಾತ್ರಿ ಗಂಟೆ 10ಕ್ಕೆ ಉಳ್ಳಾಲ್ತಿ ಮೆಚ್ಚಿ ಜಾತ್ರೆ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಏಪ್ರಿಲ್ 17ರಂದು ಶುಕ್ರವಾರ ಬೆಳಗ್ಗೆ ಗಂಟೆ 10ಕ್ಕೆ ಶ್ರೀ ಮಲರಾಯ ದೈವಕ್ಕೆ ನೇಮ , ರಾತ್ರಿ ಗಂಟೆ 10ಕ್ಕೆ ನಡುಬಂಡಿ ಉತ್ಸವ( ಮಾಗಣೆ ಬಂಡಿ ಉತ್ಸವ) ನಡೆಯಲಿದೆ.
ಏಪ್ರಿಲ್ 18ರಂದು ಶನಿವಾರ ಬೆಳಗ್ಗೆ 10:30ಕ್ಕೆ ಶ್ರೀ ಮಲರಾಯ ದೈವಕ್ಕೆ ಹರಕೆ ನೇಮ, ಮಧ್ಯಾಹ್ನ 12ರಿಂದ ಅನ್ನಸಂತರ್ಪಣೆ ಹಾಗೂ ರಾತ್ರಿ ಗಂಟೆ 10ಕ್ಕೆ ಕಡೆಬಂಡಿ ಉತ್ಸವ(ಕರ್ತುಲೆ ಬಂಡಿ ಉತ್ಸವ) ದೈವೊಂಗುಲು ಒಲಸರಿ ಜಾತ್ರೆ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.








