ಮಂಗಳೂರು: ಉಳ್ಳಾಲ ವಿಧಾನಸಭಾಕ್ಷೇತ್ರದ ಮಾಜಿ ಶಾಸಕ ಇದಿನಬ್ಬ ಮಗನಿಗೆ ಉಗ್ರರೊಂದಿಗೆ ನಂಟು ಹಿನ್ನೆಲೆ ಆತನ ಮನೆಗೆ ವಿಹಿಂಪ ಬಜರಂಗದಳ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಇಂದು ಬೆಳಿಗ್ಗೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಮಾಜಿ ಶಾಸಕ ಇದಿನಬ್ಬ ಮಗ ಬಿ.ಎಂ ಬಾಷಾ ಮನೆಯ ಮುಂದೆ ಜನಜಾಗೃತಿಗಾಗಿ ರಸ್ತೆಗಳಲ್ಲಿ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದ್ದು, ಆ ಬಳಿಕ ಇದಿನಬ್ಬ ಅವರ ಸೊಸೆಯ ಜೊತೆ ಮಾತಾನಾಡುವುದಕ್ಕೆ ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದು ಮನೆಗೆ ನುಗ್ಗಲು ಯತ್ನಿಸಿದರು.
ಇದನ್ನೂ ಓದಿ: ಉಳ್ಳಾಲ: ಟೋಲ್ ಪ್ಲಾಝಾದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ವ್ಯಕ್ತಿಯ ಶವ ನಿರ್ಜನ ಪ್ರದೇಶದಲ್ಲಿ ಪತ್ತೆ
ಈ ಸಂದರ್ಭದಲ್ಲಿ ಪೊಲೀಸರು ವಿಶ್ವಹಿಂದೂ ಪರಿಷತ್ ವಿಭಾಗ ಸಂಚಾಲಕ ಶರಣ್ ಪಂಪ್ ವೆಲ್ ಸಹಿತ ಹಿಂದೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈ ಬಗ್ಗೆ ಎರಡು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ ವಿಹಿಂಪ, ಜಿಲ್ಲೆಯಲ್ಲಿ ಲವ್ ಜಿಹಾದ್ ನಡೆಯುತ್ತಿದೆ. ಪ್ರೀತಿಪ್ರೇಮದ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಮುಸ್ಲಿಂಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ನಾವು ಹಲವು ಬಾರಿ ಹೇಳಿದ್ದೇವೆ. ಅಂಥಹದ್ದೇ ಘಟನೆ ಇದಿನಬ್ಬ ಮನೆಗೆ ದಾಳಿ ಮಾಡಿದಾಗ ಬಹಿರಂಗವಾಗಿದೆ.
ಇದನ್ನೂ ಓದಿ: ಬೆಳ್ತಂಗಡಿ: ಸುಲ್ಕೆರಿಯಲ್ಲಿ ನಾಪತ್ತೆಯಾದ 2 ವರ್ಷದ ಮಗುವಿನ ಮೃತ ದೇಹ ನದಿಯಲ್ಲಿ ಪತ್ತೆ
ಆಕೆಯ ಹೆಸರು ದೀಪ್ತಿ ಮಾರ್ಲ. ಆಕೆ ಬಂಟ ಸಮುದಾಯದವಳಾಗಿದ್ದು. ಪುತಿಷ್ಠಿತ ಕಾಲೇಜಿನಲ್ಲಿ ಫಿಸಿಯೋಥೆರಪಿ ಶಿಕ್ಷಣ ಮಾಡುತ್ತಿದ್ದಾಗ ಆಕೆಯನ್ನು ಪ್ರೀತಿಸಿ ಮತಾಂತರ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಎರಡು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದರು. ಆಗಸ್ಟ್ 11ರಂದು ಈ ದೇಶ ವಿರೋಧಿ ಚಟುವಟಿಕೆ ವಿರುದ್ಧ ಉಳ್ಳಾಲದಾದ್ಯಂತ ಪೋಸ್ಟ್ ಕಾರ್ಡ್ ಚಳುವಳಿ ನಡೆಸಲಿದ್ದೇವೆ ಎಂದು ತಿಳಿಸಿದರು.