Monday, May 6, 2024
spot_imgspot_img
spot_imgspot_img

ಆಂಬ್ಯುಲೆನ್ಸ್​ ಸಿಗದೇ ಕೊರೊನಾದಿಂದ ಮೃತಪಟ್ಟ ತಾಯಿಯ ಶವವನ್ನು ಆಟೋ ರಿಕ್ಷಾದಲ್ಲೇ ಸಾಗಿಸಿದ ಮಗ!

- Advertisement -G L Acharya panikkar
- Advertisement -

ಬೆಂಗಳೂರು: ಆಂಬ್ಯುಲೆನ್ಸ್​ ಸಿಗದೇ ಕೊರೊನಾದಿಂದ ಮೃತಪಟ್ಟ ತಾಯಿಯ ಮೃತದೇಹವನ್ನು ಮಗ ಆಟೋ ರಿಕ್ಷಾದಲ್ಲೇ ಸಾಗಿಸುತ್ತಿರುವ ದೃಶ್ಯವು ನಗರದ ನಾಯಂಡಳ್ಳಿ ಜಂಕ್ಷನ್​ನಲ್ಲಿ ಕಂಡುಬಂದಿದೆ.

ಮಂಡ್ಯ ಮೂಲದ ಶಾರದಮ್ಮ ಎನ್ನುವ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಮಗ ಶಿವಕುಮಾರ್​ ಎನ್ನುವವರು ತಾಯಿಯನ್ನು ಉಳಿಸಿಕೊಳ್ಳಲು ಬೆಂಗಳೂರಿನ ಸಾಲು ಸಾಲು ಆಸ್ಪತ್ರೆಗೆ ತಿರುಗಿದ್ದಾರೆ. ಆದರೆ ಆಸ್ಪತ್ರೆಗಳು ಆಕ್ಸಿಜನ್​ ಸಬೂಬು ಹೇಳಿ ವಾಪಾಸ್​ ಕಳುಹಿಸಿದ್ದು, ಕೊನೆಗೆ ಖಾಸಗಿ ಆಸ್ಪತ್ರೆಯೊಂದಕ್ಕೆ ಹೋಗಿ ಪರೀಕ್ಷಿಸಿದಾಗ, ಶಾರದಮ್ಮ ಮೃತಪಟ್ಟಿದ್ದರು.

ಸೂಕ್ತ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಮೃತಪಟ್ಟ ತಾಯಿಯ ಮೃತದೇಹವನ್ನು ಮಂಡ್ಯದ ಮಳವಳ್ಳಿಗೆ ಸಾಗಿಸಲು ಆಂಬ್ಯುಲೆನ್ಸ್​ ​ಗೆ ಯತ್ನಿಸಿದ್ದು, ಆದರೆ ಯಾವುದೇ ಆಂಬ್ಯುಲೆನ್ಸ್ ಇವರ ಸಹಾಯಕ್ಕೆ ಬರದಿದ್ದಲ್ಲಿ, ಶಿವಕುಮಾರ್ ಕೊನೆಗೆ​ ಆಟೋದಲ್ಲಿಯೇ ತಾಯಿಯ ದೇಹವನ್ನು ಸಾಗಿಸಿದ್ದಾರೆ. ನಾಯಂಡಳ್ಳಿ ಜಂಕ್ಷನ್ ಬಳಿ ಪೊಲೀಸ್​ ತಪಾಸಣೆ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಇದ್ದ ಪೊಲೀಸರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಡಲು ಮುಂದಾಗಿದ್ದಾರೆ.

- Advertisement -

Related news

error: Content is protected !!