Sunday, July 19, 2026
spot_imgspot_img
spot_imgspot_img

ಧರ್ಮನಗರ: (ಆ.3) ಸಿದ್ಧಿವಿನಾಯಕ ಯುವಕ ಮಂಡಲ (ರಿ) ಆಶ್ರಯದಲ್ಲಿ ಕಾರ್ಯಾಡಿ ಮಜಲು ಗದ್ದೆಯಲ್ಲಿ 4 ನೇ ವರ್ಷದ ’ಕೆಸರ್ದ ಕಂಡಡ್ ಒಂಜಿ ದಿನ’

- Advertisement -
- Advertisement -

ಧರ್ಮನಗರ: ಸಿದ್ಧಿವಿನಾಯಕ ಯುವಕ ಮಂಡಲ (ರಿ) ಧರ್ಮನಗರ – ಕಂಬಳಬೆಟ್ಟು ಆಶ್ರಯದಲ್ಲಿ ಯಶಸ್ವಿ ನಾಲ್ಕನೇ ವರ್ಷದ ತುಳುನಾಡ ಪೆರ್ಮೆದ ’ಕೆಸರ್ದ ಕಂಡಡ್ ಒಂಜಿ ದಿನ’ ಕಾರ್ಯಕ್ರಮ ಆಗಸ್ಟ್‌ 3 ನೇ ಆದಿತ್ಯವಾರದಂದು ಕಾರ್ಯಾಡಿ ಮಜಲು ಗದ್ದೆಯಲ್ಲಿ ನಡೆಯಲಿದೆ.

ಬೆಳಿಗ್ಗೆ ಗಂಟೆ 8.00ಕ್ಕೆ ಧರ್ಮನಗರ ಶ್ರೀ ಜಯದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಿಂದ ಕಾರ್ಯಾಡಿ ಬೈಲಿಗೆ ಬೈಕ್‌ ರ್ಯಾಲಿ ನಡೆಯಲಿದೆ. ಬೆಳಿಗ್ಗೆ ಗಂಟೆ 9.00ಕ್ಕೆ : ವಿಷ್ಣುಮೂರ್ತಿ ಕುಣಿತ ಭಜನಾ ತಂಡ ವಿಷ್ಣುನಗರ ಕುಂಡಡ್ಕ ಇವರಿಂದ ಕುಣಿತ ಭಜನೆ ನಡೆಯಲಿದೆ.

ಬೆಳಿಗ್ಗೆ ಗಂಟೆ 9.30ಕ್ಕೆ ಈಶ್ವರ ಭಟ್‌ ಪಂಜಿಗುಡ್ಡೆ, ಅಧ್ಯಕ್ಷರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರ ಶಾಸಕ ಅಶೋಕ್‌ ಕುಮಾರ್‌ ರೈ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಜಯ ಕೆ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.


ಕಾರ್ಯಕ್ರಮದಲ್ಲಿ ತಾರಾನಾಥ್ ಸಾಲ್ಯಾನ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಂಟ್ವಾಳ, ರಾಜರಾಮ್ ಭಟ್ ಬಲಿಪಗುಳಿ. ಇಕೋಬ್ಲಾಸ್ ಕಂಪೆನಿ., ಪದ್ಮರಾಜ್ ಪೂಜಾರಿ, ಕೋಶಾಧಿಕಾರಿ, ಗೋಕರ್ಣನಾಥೇಶ್ವರ ದೇವಸ್ಥಾನ ಕುದ್ರೋಳಿ, ವಿಜಯ ಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ಬಂಟ್ವಾಳ, ವಿನಯ ಸುವರ್ಣ ಪುರುಷರಕಟ್ಟೆ, ವ್ಯವಸ್ಥಾಪನಾ ಸಮಿತಿ ಸದಸ್ಯರು ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಮಹೇಶ್ ಕೆ. ಸವಣೂರು, ವಕೀಲರು, ದ.ಕ.ಜಿಲ್ಲಾ ಸಹಕಾರ ಸಂಘಗಳ ಗೌರವ ಮಧ್ಯಸ್ಥಗಾರರು, ಕ್ಯಾಪ್ಟನ್ ಧನಂಜಯ ನಾಯೊಟ್ಟು, ನಿವೃತ್ತ ಸೈನಿಕರು ಭೂಸೇನೆ, ವಿಶ್ವನಾಥ ಗೌಡ ಕುಳಾಲು, ಮುಖ್ಯೋಪಾಧ್ಯಾಯರು. ಚಂದಳಿಕೆ ಶಾಲೆ, ಬಾಬುರಾಯ ಆಚಾರ್ಯ ಅಳಕೆಮಜಲು. ಹಿರಿಯ ವಾಸ್ತುತಜ್ಞರು, ಮೋನಪ್ಪ ಕಜೆ, SST Logistics, ಕಬಕ., ಪ್ರವೀಣ ನಾಯ್ತೊಟ್ಟು, ನಿವೃತ್ತ ಸೈನಿಕ, ಭೂಸೇನೆ, ರವೀಂದ್ರನಾಥ ಮೇಲಾಂಟ, ಸಿ.ಇ.ಓ (ಪ್ರಭಾರ) ಇದ್ದಿದು ಸೇವಾ ಸಹಕಾರಿ ಸಂಘ, ಪ್ರಫುಲ್ಲ ಗಣೇಶ್, IRCMD ಎಜುಕೇಶನ್ ಸೆಂಟ‌ರ್ ಪುತ್ತೂರು, ನಾರಾಯಣ ಪೂಜಾರಿ ಬದಿಗುಡ್ಡೆ ಜತೆಕಾರ್ಯದರ್ಶಿ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ, ಬೇರಿಕೆ, ರಾಜೇಶ್ ಕೆ. ಶಾಖಾ ವ್ಯವಸ್ಥಾಪಕರು, ಶ್ರೀ ಸುಬ್ರಹ್ಮಣ್ಯ ಸಹಕಾರ ಸಂಘ ನಿ.ವಿಟ್ಲ ಶಾಖೆ, ಮೋಹನ್ ಗುರ್ಜಿನಡ್ಕ, ಕಾಂಗ್ರೆಸ್ ವಿಟ್ಲ ಬ್ಲಾಕ್ ಹಿಂದುಳಿದ ವರ್ಗ ಅಧ್ಯಕ್ಷರು, ಎಲ್ಯಣ್ಣ ಪೂಜಾರಿ ಸದಸ್ಯರು ವಿಟ್ಲಮುಡ್ನರು ಗ್ರಾಮ ಪಂಚಾಯತ್, ರಾಮಣ್ಣ ಪಿಲಿಂಜ ಅಕ್ರಮ ಸಕ್ರಮ ಸದಸ್ಯರು, ಪುತ್ತೂರು ವಿಧಾನಸಭಾ ಕ್ಷೇತ್ರ, ಕಾಂತಪ್ಪ ಪೂಜಾರಿ ಕಾರ್ಯಾಡಿ. ರಾಜೇಶ್ ಶೆಟ್ಟಿ ಮುಂಡತ್ತಾಜೆ, ಯುವ ಸಾಹಿತಿ, ಬ್ರಾಮರಿ ಕ್ರಿಯೇಷನ್ ಬಾರೆಬೆಟ್ಟು, ನೀಲಪ್ಪ ಗೌಡ ಕೊಡಂಚರಪಾಲು, ಅಧ್ಯಕ್ಷರು, ಷಣ್ಮುಖ ಯುವಕ ಮಂಡಲ ಕೋಲ್ವೆ, ರಾಜೀವ ಬೊಳುವಾರು. ಮಾಲಕರು ಭಗವತಿ ಮೋಟಾರ್ ವರ್ಕ್ಸ್ ಬೊಳುವಾರು, ರಮೇಶ್ ಗೌಡ ಮಾಡೇಲು ಕೃಷಿಕರು, ಲೋಕೇಶ್ ಗೌಡ ಸ್ಕಂದ ಪ್ರಿಂಟರ್ಸ್ ಪುತ್ತೂರು, ಶರತ್ ಮೂಡಂಬೈಲು, ಮಾಲಕರು, ಸಾಯಿ ಟ್ರೇಡರ್ಸ್ ಮುಡಿಪು, ರೋಹಿತ್, ನಿರ್ದೇಶಕರು. ಇಡೀದು ಸೇವಾ ಸಹಕಾರಿ ಸಂಘ, ಹೃಷಿಕೇಶ್, ನಿರ್ದೇಶಕರು, ಇಡ್ತಿದು ಸೇವಾ ಸಹಕಾರಿ ಸಂಘ, ನವೀನ್, ನಿರ್ದೇಶಕರು. ಇಡೀದು ಸೇವಾ ಸಹಕಾರಿ ಸಂಘ, ಸತೀಶ್ ಅಳಕೆಮಜಲು, ನಿರ್ದೇಶಕರು. ಇಡೀದು ಸೇವಾ ಸಹಕಾರ ಸಂಘ, ಯತೀಶ್ ಹಡೀಲು, ಧನಂಜಯ ಅರ್ಕೆಚ್ಚಾರು, ಕೆನರಾ ಬ್ಯಾಂಕ್ ಸಿಬ್ಬಂದಿ, ಕುಮಾರ್ ಅಶೋಕನಗರ, ಇಡೀದು ಸೇವಾ ಸಹಕಾರಿ ಸಂಘ, ರಾಧಾಕೃಷ್ಣ ಅಳಕೆಮಜಲು, ಪೂವಪ್ಪ ಪಿಲಿಂಜ ಜೇನು ಕೃಷಿಕರು, ಚೆನ್ನಪ್ಪ ಅಮೈ, ರಾಮಣ್ಣ ದೇವಸ್ಯ, ಹರೀಶ ನೀರಕೋಡಿ, ಶ್ರೀಮತಿ ಮುಖ್ಯೋಪಾಧ್ಯಾಯರು. ಆರ್.ಎಂ.ಎಸ್.ಎ. ಶಾಲೆ ವಿಟ್ಲ, ಶ್ರೀಮತಿ ಉಷಾಕುಮಾರಿ ವೈದ್ಯಾಧಿಕಾರಿ ಉರಿಮಜಲು, ಶ್ರೀಮತಿ ವಸಂತಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಇದ್ದಿದು ಹಾಲು ಉ. ಸ. ಸಂಘ, ಶ್ರೀಮತಿ ಪ್ರತಿಮಾ ಜಗದೀಶ್ ಅಳಕೆಮಜಲು, ಶ್ರೀಮತಿ ಲತಾ ಜಾಕ್ ಅನಿಲ್ ನಿನ್ನಿಕಲ್ಲು ನರ್ಸರಿ, ಶ್ರೀಮತಿ ರೂಪ ಶೆಟ್ಟಿ ಮೂಡೈಮಾರ್, ಶ್ರೀಮತಿ ಸಂಧ್ಯಾ ಉರಿಮಜಲು, ಶ್ರೀಮತಿ ಪೂರ್ಣಿಮಾ ಉರಿಮಜಲು,ಶ್ರೀಮತಿ ನಯನ ವಿಟ್ಲ, ನಿರ್ದೇಶಕರು, ಯುವವಾಹಿನಿ ರಿ. ವಿಟ್ಲ, ಶ್ರೀಮತಿ ಹರ್ಷಿತ ಮಿತ್ತೂರು, ಇಡೀದು ಸೇವಾ ಸಹಕಾರಿ ಸಂಘ ನಿ. ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ ಗಂಟೆ 4:00 ಸಮಾರೋಪ, ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ತಾರಾನಾಥ ಪೂಜಾರಿ ಬೋಳಿಗದ್ದೆ ಅಧ್ಯಕ್ಷರು, ಸಿದ್ದಿವಿನಾಯಕ ಯುವಕ ಮಂಡಲ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯ‌ಕ್ರಮದಲ್ಲಿ ಬಿ.ಜೆ.ಪಿ. ಮುಖಂಡರು ಅರುಣ್ ಕುಮಾರ್ ಪುತ್ತಿಲ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ದಯಾನಂದ ಶೆಟ್ಟಿ ಉಜಿರೆಮಾರ್, ಅಧ್ಯಕ್ಷರು, ಬಿಜೆಪಿ ಗ್ರಾಮಾಂತರ ಮಂಡಲ ಪುತ್ತೂರು, ದಿವಾಕರ ದಾಸ್ ನೇರ್ಲಾಜೆ, ಎಸ್.ಎಲ್.ವಿ. ಗ್ರೂಪ್ಸ್ ಪ್ರೈ.ಲಿ. ಮೈಸೂರು, ಕರುಣಾಕರ ಗೌಡ ನಾಯೊಟ್ಟು, ಅಧ್ಯಕ್ಷರು ವಿಟ್ಲ ಪಟ್ಟಣ ಪಂಚಾಯತ್, ಡಾ. ಉಷಾ ಪುನೀತ್ BAMS, ಆರ್.ಬಿ.ಎಸ್.ಕೆ. ವೈದ್ಯಾಧಿಕಾರಿ ಬಂಟ್ವಾಳ, ಶ್ರೀ ಉಮೇಶ್ ವೀರಮಂಗಲ, ಕಾರ್ಯದರ್ಶಿ, ಬಿಜೆಪಿ ಪತ್ತೂರು ಗ್ರಾಮಾಂತರ ಮಂಡಲ, ಕುಶಾಲಪ್ಪ ನಾಯೊಟ್ಟು, ನಿವೃತ್ತ ಸೈನಿಕರು, ಭೂಸೇನೆ, ಕಾಂತಪ್ಪ ಶೆಟ್ಟಿ ಮೂಡೈಮಾರು, ಬಾಬು ಪುರುಷ ಅರ್ಕೆಚ್ಚಾರು, ಮಹಾಬಲ ಆಚಾರ್ಯ ಕಾರ್ಯಾಡಿ, ಬಾಲಸುಬ್ರಹ್ಮಣ್ಯ ಭಟ್ ಉರಿಮಜಲು, ಅಶೋಕ, ಪೋಸ್ಟ್ ಆಫೀಸರ್ ಸುಳ್ಯ, ವಸಂತ ನೆಕ್ಕರೆ, ಎನ್.ವಿ.ಜಿ. ಕನ್‌ಸ್ಟ್ರಕ್ಷನ್ಸ್ ಕಬಕ, ಪ್ರಶಾಂತ್ ಶೆಣೈ, ‘ಅವನಿ’ ಕರ್ಮಲ, ಬೈರಿಕಟ್ಟೆ, ಪ್ರಶಾಂತ್ ಎಂಟರ್‌ಪ್ರೈಸಸ್, ಉದಯ ಅಳಕೆಮಜಲು, ಉಪಾಧ್ಯಕ್ಷರು, ಶಾರದಾಂಬಾ ಭಜನಾ ಮಂದಿರ, ಅಶೋಕನಗರ, ಸುನಿಲ್‌ರಾಜ್ ಶಕ್ತಿ ಟ್ರಾನ್ಸ್‌ಪೋರ್ಟ್ ವಿಟ್ಲ, ಲೋಹಿತ್ ಪೂಜಾರಿ ಪಿಲಿಂಜ ಕೋಶಾಧಿಕಾರಿ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ, ಬೇರಿಕೆ, ನವೀನ್ ಪಟ್ಲ ಉದ್ಯಮಿಗಳು, ಸುಂದರ ಧರ್ಮನಗರ, ಸದಾಶಿವ ಗೌಡ ಅಮೈ, ಕೃಷಿಕರು, ನಾರಾಯಣ ಪೂಜಾರಿ ಮುಕೈ, ಪುರಂದರ ಅಂಚನ್ ಮಾತೃಶ್ರೀ ಇಂಜಿನಿಯರ್ ವರ್ಕ್ಸ್, ಬೊಳುವಾರು, ರವಿರಾಜ್ ವಿ., ಉದ್ಯಮಿ ಪುತ್ತೂರು, ಉಮೇಶ್, ನಿರ್ದೇಶಕರು. ಇಡೀದು ಸೇವಾ ಸಹಕಾರಿ ಸಂಘ, ಶ್ರೀಮತಿ ವಿದ್ಯಾ, ನಿರ್ದೇಶಕರು. ಇಡೀದು ಸೇವಾ ಸಹಕಾರಿ ಸಂಘ, ಶ್ರೀಮತಿ ವಿಜಯಲಕ್ಷ್ಮೀ ವೇಣುಗೋಪಾಲ ಶೆಟ್ಟಿ. ಮರುವಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬೆಳಗ್ಗೆ 9.45 ಕ್ಕೆ ನಿಧಿಶೋಧ ಕಾರ್ಯಕ್ರಮ ಆರಂಭವಾಗಲಿದೆ. ಬೆಳಿಗ್ಗೆ ಗಂಟೆ 10.00 : ಆಟೋಟ ಸ್ಪರ್ಧೆಗಳ ಆರಂಭವಾಗಲಿದೆ. ಮಧ್ಯಾಹ್ನ 12.30ಕ್ಕೆ ಗುಂಪು ಆಟಗಳ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ : ಭೋಜನ ವ್ಯವಸ್ಥೆ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ : ತುಳು ಪಾರ್ದನ ಸ್ಪರ್ಧೆ ನಡೆಯಲಿದೆ. ಗ್ರಾಮದ ಮನೆಯವರು ತುಳುನಾಡ ತಿನಿಸುಗಳಾದ ಪತ್ರೊಡೆ, ಚೇವು ಕಜಿಪು, ತಜಂಕ್‌, ಉಪ್ಪಡ್‌ಪಚ್ಚಿಲ್‌ ಇವುಗಳಲ್ಲಿ ಯಾವುದಾದರೂ ಒಂದನ್ನು ಮನೆಯಲ್ಲಿಯೇ ತಯಾರಿಸಿ ತಂದು ಕಾರ್ಯಕ್ರಮದಲ್ಲಿ ಕೈಜೋಡಿಸುವುದು.

ಆಟೋಟ ಸ್ಪರ್ಧೆಗಳ ವಿವರ:

1 ರಿಂದ 5ನೇ ತರಗತಿ:
*100 ಮೀಟರ್‌ ಓಟ
*ಉಪ್ಪು ಮೂಟೆ ಓಟ
*ಬಾಲ್ದಿಗೆ ಚೆಂಡು ಹಾಕುವುದು.

6 ರಿಂದ 10ನೇ ತರಗತಿ:
*200 ಮೀಟರ್‌ ಓಟ
*ಹಿಮ್ಮುಖ ನಡಿಗೆ
*3 ಕಾಲಿನ ಓಟ
*ಹಾಳೆ ಹಲಗೆ ಓಟ

ಯುವತಿಯರಿಗೆ / ಮಾತೆಯರಿಗೆ:
*ಮಡಿಕೆ ಒಡೆಯುವುದು
*ಗೂಟಸುತ್ತಿ ಓಟ
*ನೀರು ತುಂಬಿದ ಕೊಡಪಾನ ನಡಿಗೆ
*ಹಗ್ಗಜಗ್ಗಾಟ
*ಕಾಯಿ ಎಸೆತ
*ಹಿಟ್ಟಿನಲ್ಲಿ ನಾಣ್ಯ ಹಕ್ಕುವುದು
*100 ಮೀಟರ್‌ ಓಟ

ಸಾರ್ವಜನಿಕರಿಗೆ:
*ತಪ್ಪಂಗಾಯಿ
*ಮಡಿಕೆ ಒಡೆಯುವ ಸ್ಪರ್ಧೆ
*ಕಾಯಿ ಎಸೆತ
*ಸಂಗೀತ ಕುರ್ಚಿ
*ಕಂಬ ಏರುವುದು
*200 ಮೀಟರ್‌ ಓಟ
*ಗೂಟಸುತ್ತಿ ಓಟ

ಸ್ಥಳದಲ್ಲೇ ಇತರ ಆಟಗಳನ್ನೂ ಆಡಿಸಲಾಗುವುದು.
*ತುಳು ಗಾದೆ ಮಾತು, ಒಗಟು ಸ್ಪರ್ಧೆ ಇರುತ್ತದೆ.

ಸಾರ್ವಜನಿಕರಿಗೆ ಪಿರಮಿಡ್ ರಚನೆ – (ಹಿಂದೂಬಾಂಧವರಿಗೆ ಮಾತ್ರ)
*ತಂಡ ರಚಿಸಿಕೊಂಡು ಬರುವುದು, ಸದಸ್ಯರ ಮಿತಿ ಇಲ್ಲ)
*ಪ್ರಥಮ ಬಹುಮಾನ : ರೂ. 1000/- ಮತ್ತು ಟ್ರೋಫಿ.

ಸಾರ್ವಜನಿಕರಿಗೆ ಕಬಡ್ಡಿ ಪಂದ್ಯಾಟ (ಹಿಂದೂಬಾಂಧವರಿಗೆ ಮಾತ್ರ)
*ತಂಡ ರಚಿಸಿಕೊಂಡು ಬರುವುದು ಸದಸ್ಯರ ಮಿತಿ 7,
*ಪ್ರಥಮ ಬಹುಮಾನ: ರೂ. 1250/-, ದ್ವಿತೀಯ ಬಹುಮಾನ: ರೂ. 750/- ಹಾಗೂ ಟ್ರೋಫಿ

ಪುರುಷರಿಗೆ ಹಗ್ಗಜಗ್ಗಾಟ ಸ್ಪರ್ಧೆ (8 ಸದಸ್ಯರ ತಂಡ ರಚಿಸಿಕೊಂಡು ಬರುವುದು)
*ಪ್ರಥಮ ಬಹುಮಾನ : ರೂ. 3000/- ಕೊಡುಗೆ : ಜೋತಿ ವೈನ್ಸ್ ಪುತ್ತೂರು.
*ದ್ವಿತೀಯ ಬಹುಮಾನ : ರೂ. 2000/- ಕೊಡುಗೆ: ಕಾರ್ತಿಕ್ ಶೆಟ್ಟಿ ಮೂಡೈಮಾರ್
ಟ್ರೋಫಿಗಳ ಕೊಡುಗೆ : ಪ್ರಕಾಶ್ ಕೋಡಿಜಾಲು

ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ (6 ಸದಸ್ಯರ ತಂಡ ರಚಿಸಿಕೊಂಡು ಬರುವುದು)
*ಪ್ರಥಮ ಬಹುಮಾನ: ರೂ. 1250/-
*ದ್ವಿತೀಯ ಬಹುಮಾನ: ರೂ. 750/- ಹಾಗೂ ಟ್ರೋಫಿ

- Advertisement -

Related news

error: Content is protected !!