- Advertisement -
- Advertisement -


ಕೇಪು: ತೋಟಗಾರಿಕೆ ಇಲಾಖೆ ಕುಂದಾಪುರ ಹಮ್ಮಿಕೊಂಡ , ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿಯಲ್ಲಿ ( ಪಿ.ಕೆ.ವಿ.ವೈ.) 2024 -25ರ ಜೇನು ಸಾಕಾಣಿಕೆ ಹಾಗೂ ಜೇನು ಪೆಟ್ಟಿಗೆಯ ಬಗ್ಗೆ ಮಾಹಿತಿ ಕಾರ್ಯಾಗಾರ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಬಡೆಕೋಡಿಯ ಪ್ರಗತಿಪರ ಕೃಷಿಕ ,ಸಮಾಜ ಸೇವಕ ,ರಾಜ್ಯ ಪ್ರಶಸ್ತಿ ವೀಜೇತರು ಸುಧಾಕರ ಪೂಜಾರಿಯವರ ಮನೆಯಲ್ಲಿ ನಡೆಯಿತು.

ಜೇನು ಸಾಕಾಣಿಕೆ ಪೆಟ್ಟಿಗೆಯ ಬಗ್ಗೆ ಸುಧಾಕರ ಪೂಜಾರಿ ಮಾಹಿತಿ ನೀಡಿದರು. ಕುಂದಾಪುರ ತಾಲೂಕಿನ ರೈತರು ಜೇನು ಸಾಕಾಣಿಕೆಯ ಬಗ್ಗೆ ಸಮಗ್ರ ಮಾಹಿತಿ ಪಡೆದು ಕೊಂಡರು.
ತೋಟಗಾರಿಕೆಯ ಅಧಿಕಾರಿಗಳಾದ ಪ್ರವೀಣ್, ಕಾರ್ತಿಕ್ ಕಾರ್ಯಗಾರದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ , ಬ್ಯಾಂಕ್ ನಿಂದ ರೈತರಿಗೆ ಸಿಗುವ ಸವಲತ್ತು ಗಳ ಬಗ್ಗೆ ಮಾಹಿತಿ ನೀಡಿದರು. ರಾದಕೃಷ್ಣ ಪೂಜಾರಿ ಕೋಡಿ ಜೇನು ಸಾಕಾಣಿಕೆಯ ಸಮಗ್ರ ಮಾಹಿತಿ ನೀಡಿದರು. ಬಳಿಕ ರೈತರು ವಾರಣಸಿ ಫಾರ್ಮ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
- Advertisement -








