ಕಾಸರಗೋಡು: ಸ್ನಾನಗೃಹದಲ್ಲಿ ಪ್ಲಸ್ 1 ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಪ್ರಣಮ್ಯಾ (16) ಎಂದು ಗುರುತಿಸಲಾಗಿದೆ. ಈಕೆ ಬೆಳ್ಳೂರಿನ ವಾಣಿನಗರ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಒನ್ ವಿದ್ಯಾರ್ಥಿನಿ. ಬೆಳ್ಳೂರು ಕಿನ್ನಿಂಗಾರ್ ಬಳ್ಳೇರಿ ನಿವಾಸಿ ಕೊರಗಪ್ಪ ಮತ್ತು ಪುಷ್ಪಾ ದಂಪತಿಯ ಪುತ್ರಿ.
ಸೋಮವಾರ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದೆ. ರಾತ್ರಿ ಊಟ ಮುಗಿಸಿ ಸ್ನಾನಕ್ಕೆ ಹೋದಾಕೆ ಬಹಳ ಹೊತ್ತಿನ ಬಳಿಕವೂ ಹಿಂತಿರುಗದಿದ್ದಾಗ ತಾಯಿ ಹಲವು ಬಾರಿ ಬಾಗಿಲು ಬಡಿದಿದ್ದಾರೆ. ನಂತರ ಅದನ್ನು ತಳ್ಳಿ ಬಾಗಿಲು ತೆರೆದಾಗ ಪ್ರಣಮ್ಯಾ ನೇಣು ಬಿಗಿದು ನೇತಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗಲೇ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.
ಮಂಗಳವಾರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರು ಪರಿಯಾರಂ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು. ಜೂನ್ ನಲ್ಲಿ ಪ್ಲಸ್ ಟು ತರಗತಿಗೆ ಹೋಗಲು ತಯಾರಿ ನಡೆಸಿದ್ದಳು. ಪ್ರಣಮ್ಯಾ ನೃತ್ಯ ಮತ್ತು ರೀಲ್ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು. ಸಾವಿನ ಕಾರಣದ ಬಗ್ಗೆ ಬೇರೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಆದೂರು ಪೊಲೀಸರು ತಿಳಿಸಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಾಗಿದೆ.