ವಿಟ್ಲದಲ್ಲಿ ಪ್ರಪ್ರಥಮ ಬಾರಿಗೆ ಸುಸಜ್ಜಿತ ಪಾರ್ಕಿಂಗ್ ಮತ್ತು ಸಕಲ ವ್ಯವಸ್ಥೆಯ ಅತ್ಯಾಧುನಿಕ ಬೃಹತ್ ಅಡಿಟೋರಿಯಂ




ವಿಟ್ಲ: ಮದುವೆ ಸಭಾಂಗಣ, ಕಾಸ್ಫರೆನ್ಸ್ ಹಾಲ್, ಕಾರ್ಪೊರೇಟ್ ಇವೆಂಟ್ ವಿಟ್ಲ ಪೇಟೆಯಲ್ಲಿ ಪ್ರಪ್ರಥಮ ಬಾರಿಗೆ ವಿಶಾಲ, ಸುಸಜ್ಜಿತ ಪಾರ್ಕಿಂಗ್ ಮತ್ತು ಸಕಲ ವ್ಯವಸ್ಥೆಯ ಅತ್ಯಾಧುನಿಕ ಬೃಹತ್ ಅಡಿಟೋರಿಯಂ ಬ್ರೈಟ್ ಅಡಿಟೋರಿಯಂ ಉದ್ಘಾಟನಾ ಸಮಾರಂಭವು ಡಿ.12ನೇ ಗುರುವಾರ ಸಂಜೆ 6:45 ರೀಹಾ ಪ್ಲಾನೆಟ್ ಹತ್ತಿರ, ಪುತ್ತೂರು ರಸ್ತೆ, ವಿಟ್ಲ ಇಲ್ಲಿ ನಡೆಯಲಿದೆ.


ಸಯ್ಯದ್ ಸಾಬಿಕಲಿ ಶಿಹಾಬ್ ತಂಙಳ್, ಪಾಣಕ್ಕಾಡ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಉದ್ಘಾಟನಾ ಸಮಾರಂಭವನ್ನು ಅಧ್ಯಕ್ಷರು ಎಸ್.ಎಂ.ಎ. ಕರ್ನಾಟಕ ರಾಜ್ಯ ಸಯ್ಯದ್ ಇಸ್ಮಾಯಿಲ್ ತಂಙಳ್ ಉಜಿರೆ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬಹು| ಸಯ್ಯದ್ ಅಲಿ ತಂಙಳ್, ಕುಂಬೋಲ್, ಬಹು| ಸಯ್ಯದ್ ಮಸ್ಊದ್ ತಂಙಳ್, ಎಟ್ಟಿಕುಳಂ, ಬಹು|ಕೆ. ಮಹಮೂದುಲ್ ಫೈಝಿ ವಾಲೆಮುಂಡೋವು, ಬಂಗಾರು ಅರಸರು ವಿಟ್ಲ ಅರಮನೆ, ಉಡುಪಿ ಮತ್ತು ಚಿಕ್ಕಮಗಳೂರು ಖಾಝಿ ಬಹು| ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಬಹು| ಸಯ್ಯದ್ ಮುಖ್ತಾರ್ ತಂಙಳ್, ಕುಂಬೋಲ್, ಪ್ರಾಂಶುಪಾಲ ಇಮಾಮ್ ಶಾಫೀ ಅಕಾಡೆಮಿ ಕುಂಬಳೆ ಬಹು| ಖಾಝಿ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಅವರ್ ಲೇಡಿ ಆಫ್ ಡಾಲರ್ಸ್ ಚರ್ಚ್ ವಿಟ್ಲ ಧರ್ಮಗುರುಗಳು ರೆ|ಫಾ| ಐವನ್ ಮೈಕಲ್ ರಾಡ್ರಿಗಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕರ್ನಾಟಕ ವಿಧಾನಸಭೆ ಅಧ್ಯಕ್ಷರು ಯು.ಟಿ ಖಾದರ್, ವಿಟ್ಲ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಎಚ್.ಇ.ನಾಗರಾಜ್, ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಅಧ್ಯಕ್ಷ ಬಾಬು ಕೆ.ವಿ, ಸಾಮಾಜಿಕ ಧುರೀಣರು ಜ|ಮಹಮ್ಮದ್ ಕುಂಞೆ ವಿಟ್ಲ, ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು, ದ.ಕ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್, ಬಂಟ್ವಾಳ ಜಮೀಯ್ಯತುಲ್ ಫಲಾಕ್ ಅಧ್ಯಕ್ಷ ಅಶೀದ್ ವಿಟ್ಲ, ಸಮಾಜ ಸೇವಕ ಜ| ಶಾಕಿರ್ ಅಳಕೆಮಜಲು ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.









