- Advertisement -
- Advertisement -



ವಿಟ್ಲ :ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ನವಿಲು ಬಸದಿ ವಿಟ್ಲದಲ್ಲಿ ದಿನಾಂಕ ಫೆ. 15 ರವಿವಾರದಂದು ವಾರ್ಷಿಕ ಪೂಜಾ ಮಹೋತ್ಸವವು ನಡೆಯಲಿದೆ.
ಅಪರಾಹ್ನ ಗಂಟೆ 2ರಿಂದ ಊರ ಶ್ರಾವಕರಿಂದ ಶ್ರೀ ನಾಗದೇವರಿಗೆ ಅಭಿಷೇಕ, ಶ್ರೀ ಕ್ಷೇತ್ರಪಾಲ ದೇವರಿಗೆ ಷೋಡಶೋಪಚಾರ ಪೂಜೆ, ಶ್ರೀ ಪದ್ಮವಾತೀ ದೇವಿ ಆರಾಧನಾ ವಿಧಾನ, ಸೇವಾಕರ್ತರು; ಶ್ರೀ ಜಿನರಾಜಯ್ಯ ಮತ್ತು ಮಕ್ಕಳು,ಐಸಿರಿ ಮಂಗಳೂರು : ಶ್ರೀ ಜ್ವಾಲಾಮಾಲಿನಿ ದೇವಿ ಆರಾಧನಾ ವಿಧಾನ .ಸೇವಾಕರ್ತರು ವಿಟ್ಲ ಹೊಸಮನೆ ಶ್ರೀಮತಿ ಸುಮತಿ ಮತ್ತು ಕುಂಟುಂಬಸ್ಥರು ಮಹಾವೀರ ಸ್ವಾಮಿಗೆ 54ಕಲಶ ಅಭಿಷೇಕ. ಊರ ಶ್ರಾವಕರಿಂದ ಶ್ರೀ ಚಂದ್ರನಾಥ ಸ್ವಾಮಿಗೆ 54 ಕಲಶ ಅಭಿಷೇಕ ನೆರವೇರಲಿದೆ.

ಅಪರಾಹ್ನ ಗಂಟೆ 3-30ರಿಂದ ಸ್ವಸ್ತಿ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಶ್ರೀ ಜೈನಮಠ ಶ್ರವಣಬೆಳಗೊಳ ಇವರ ಪುರಪ್ರವೇಶ ನಡೆಯಲಿದೆ.
- Advertisement -








